``ತ್ರಿಶ೦ಕು ಸ್ವರ್ಗ`` ತಾಳಮದ್ದಳೆ ವೀಡಿಯೊ ಲೋಕಾರ್ಪಣೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಆಗಸ್ಟ್ 8 , 2015
|
ಬೆ೦ಗಳೂರು : ತ್ರಿಶ೦ಕು ಸ್ವರ್ಗ ಕಥೆಯು ಈಗಲೂ ಕುತೂಹಲಗಳನ್ನು ಉಳಿಸಿಕೊ೦ಡ ಪೌರಾಣಿಕ ಆಸಕ್ತಿದಾಯಕ ಕಥಾನಕ. ವಿನೂತನ ಚಿ೦ತನೆಯಲ್ಲಿ ಮೂಡಿಬ೦ದ ಈ ಯಕ್ಷಗಾನ ಪ್ರಸ೦ಗವನ್ನು ಮರು ಸೃಷ್ಟಿಸಿದವರು ಬೆ೦ಗಳೂರಿನ ಪ್ರಖ್ಯಾತ ಲೆಕ್ಕ ಪರಿಶೋಧಕರಾದ ಶ್ರೀ.ಪಿ.ಎಸ್.ಆಚಾರ್ ಪಣಕಜೆಯವರು. ಹಲವು ವರ್ಷಗಳ ಹಿ೦ದೆಯೇ ಸ೦ಸ್ಕೃತದ ಮಧ್ಯಮ ವ್ಲಾಯೋಗದ ಅಧಾರದಿ೦ದ ರಚಿತವಾದ “ಭಕ್ತೆ ಹಿಡಿ೦ಬೆ“ (ಭೀಮ ಘಟೋದ್ಕಜ ಕಾಳಗ) ತಾಳಮದ್ದಳೆ ವೀಡಿಯೊವು ಜನಪ್ರಿಯಗೊ೦ಡಿದ್ದು, ಈಗ ತ್ರಿಶ೦ಕು ಸ್ವರ್ಗದ 4 ಗ೦ಟೆಗಳ ದೃಶ್ಯ-ಶ್ರವಣ ರೂಪದ ತಾಳಮದ್ದಳೆ ವೀಡಿಯೊವು ಲೋಕಾರ್ಪಣೆಗೊಳ್ಳಲಿದೆ.
ಪೀಣ್ಯದ ತೆ೦ಕು ತಿಟ್ಟು ಯಕ್ಷಗಾನ ಪ್ರತಿಷ್ಠಾನ(ರಿ) ಹಮ್ಮಿಕೊ೦ಡಿರುವ 11ನೇ ವಾರ್ಷಿಕೋತ್ಸವ “ಯಕ್ಷ ಮಾಣಿಕ್ಯ - 2015“ ಉತ್ಸವದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಸ೦ಪೂರ್ಣ ವಿವರ...
ಸ೦ಪೂರ್ಣ ವಿವರ...
ಸ೦ಪೂರ್ಣ ವಿವರ...
|
|
|